ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ಧತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು ಎಂಬ ಬುಡಕಟ್ಟು ಜನಾಂಗದವರಿಗೆ ಜ್ವರಕ್ಕೆ ಔಷಧಿಯಾಗಿ ಬಳಸಲಾಗುತ್ತಿತ್ತು. ಆದ್ದರಿಂದ ಇದನ್ನು ಸಂಸ್ಕೃತದಲ್ಲಿ ಕಿರಾತ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ಲದೇ ಇದು ಅತ್ಯಂತ ಕಹಿಯಾಗಿರುದರಿಂದ ಮಹಾತಿಕ್ತ ಎಂಬ ಹೆಸರೂ ಇದೆ.
ನೆಲಬೇವು ಅಕೇಂಥೇಸಿಯೆ ಕುಟುಂಬಕ್ಕೆ ಸೇರಿದ ಮುಖ್ಯ ಔಷಧಿ ಬೆಳೆ.ಇದು ನೇರವಾಗಿ ಬೆಳೆಯುವ ಗಿಡ. ಪೂರ್ಣ ಬೆಳೆದ ಗಿಡಗಳು ೩೦-೧೦೦ ಸೆಂ.ಮೀ.ಎತ್ತರವಿರುತ್ತದೆ.ಕೊಂಬೆಗಳು ತೀಕ್ಷ್ಣವಾದ ಚೌಕಾಕಾರ ಹೊಂದಿ ಕೆಲವೊಮ್ಮೆ ಕೆರಿದಾದ ರೆಕ್ಕೆಗಳಂತೆ ಗಿಡದ ತುದಿಯ ಕಡೆಗೆ ಚುಚ್ಚಿರುತ್ತದೆ. ಎಲೆಗಳಿಗೆ ತೊಟ್ಟಿರುತ್ತದೆ.ಹೂಗಳು ಚಿಕ್ಕದಾಗೆದ್ದು ಅವು ಹೂಗೊಂಚಲಿನಲ್ಲಿ ಏಕಾಂತವಾಗಿರುತ್ತವೆ. ಹೂದಳಗಳು ಗುಲಾಬಿ ಬಣ್ಣವಿದ್ದು ಹೊರಭಾಗದಲ್ಲಿ ರೋಮಭರಿತವಾಗಿರುತ್ತದೆ. ಹಣ್ಣಿನ ಎರಡೂ ತುದಿಗಳು ಚೂಪಾಗಿ ಇರುತ್ತವೆ.ಬೀಜಗಳು ಬಹಳವಾಗಿದ್ದು ಅವುಗಳ ಬಣ್ಣ ಹಳದಿಯಿದ್ದು ಮೃದುವಾಗಿರುತ್ತದೆ.
ನೆಲಬೇವಿನ ಪಂಚಾಂಗಗಳು ಅಂದರೆ ಬೇರು,ಕಾಂಡ,ಎಲೆ,ಹೂ,ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿವೆ.
ಆಂಡ್ರೊಗ್ರಾಫೊಲೈಡ್ಸ್, ಆಂಡ್ರೊಗ್ರಾಫಿನ್,ಆಂಡ್ರೊಗ್ರಫಿನ್ ಎ,ಬಿ,ಸಿ,ಡಿ,ಇ,ಮತ್ತು ಎಫ್,ಆಂಡ್ರೊಗ್ರಾಫೊಸೈಡ್,ಜರೊಕ್ಸೈಲಿನ್ ಎ,ವೊಗೊನಿನ್, ನಿಯೊಆಂಡ್ರೊಗ್ರಾಫೊಲೈಡ್,ಪೆನಿಕುಲೈಡ್ಸ್.
ನೆಲಬೇವು ಒಂದು ಗಡುತರ ಸಸ್ಯವಾಗಿರುವುದರಿಂದ ಇದನ್ನು ಹಲವಾರು ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ.ಜೇಡಿಮಣ್ಣಿನಿಂದ ಹಿಡಿದ ಮರಳು ಮಿಶ್ರಿತ ಮಣ್ಣಿನಲ್ಲಿ ಮತ್ತು ಸಾವಯವ ಪದಾರ್ಥ ಹೊಂದಿದ ಮರಳು ಮಿಶ್ರಿತ ಜೇಡಿಮಣ್ಣು,ಈ ಬೆಳೆಗೆ ಬಲು ಸೂಕ್ತವಾಗಿದೆ. ಹೆಚ್ಚು ನೀರು ನಿಲ್ಲುವ ಹಾಗೂ ಸಮಸ್ಯಾತ್ಮಕ ಮಣ್ಣುಗಳು ಈ ಬೆಳೆಗೆ ಸೂಕ್ತವಲ್ಲ.
ನೆಲಬೇವನ್ನು ಬೀಜದಿಂದ ಅಥವಾ ಕಾಂಡದ ತುಂಡುಗಳಿಂದ ಅಭಿವೃದ್ಧಿ ಮಾಡಬಹುದು. ಬೀಜವನ್ನು ನೇರವಾಗಿ ಬಿತ್ತನೆ ಮಡಬಹುದು ಅಥವಾ ಸಸಿಮಡಿಗಳಲ್ಲಿ ಸಸಿಗಳನ್ನು ಬೆಳಸಿ, ನಾಟಿ ಮಾಡಬಹುದು. ಸಸಿಗಳನ್ನು ಪಾಲಿಥೀನ್ ಚೀಲಗಳಲ್ಲಿ ೧:೧:೧ರ ಪ್ರಮಾಣ್ದಲ್ಲಿ ಮಣ್ಣು, ಮರಳು ಮತ್ತು ಗೊಬ್ಬರ ತುಂಬಿ ಬೆಳಸಬಹುದು ಅಥವಾ ಸಿಸಿಮಡಿಗಳನ್ನು ಮಾಡಿ ಬೆಳಸಬಹುದು. ಸಸಿಮಡಿಗಳನ್ನು ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಹಾಕಿ ೫ಸೆಂ.ಮೀ. ಅಂತರದ ಸಾಲಿನಲ್ಲಿ ಬೀಜ ಬಿತ್ತಬೇಕು. ಬಿತ್ತನೆ ಮಡಿದ ಕೂಡಲೇ ಪಾಲಿಥೀನ್ ಚೀಲಗಳಿಗೆ ಅಥವಾ ಸಸಿಮಡಿಗಳಿಗೆ ನೀರು ಕೊಡಬೇಕು. ಬಿತ್ತನೆ ಬೀಜಗಳು೮-೧೦ ದಿನಗಳಲ್ಲಿ ಮೊಳೆಯುತ್ತದೆ. ಸಸಿ ಮಡಿಗಳಲ್ಲಿ ೪೫-೬೦ದಿನಗಳ ಕಾಲ ಬೆಳೆಸಿದ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.[೩]
ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ಧತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು ಎಂಬ ಬುಡಕಟ್ಟು ಜನಾಂಗದವರಿಗೆ ಜ್ವರಕ್ಕೆ ಔಷಧಿಯಾಗಿ ಬಳಸಲಾಗುತ್ತಿತ್ತು. ಆದ್ದರಿಂದ ಇದನ್ನು ಸಂಸ್ಕೃತದಲ್ಲಿ ಕಿರಾತ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ಲದೇ ಇದು ಅತ್ಯಂತ ಕಹಿಯಾಗಿರುದರಿಂದ ಮಹಾತಿಕ್ತ ಎಂಬ ಹೆಸರೂ ಇದೆ.