ಸಂ: ಅರ್ಕ, ಮಂದಾರ
ಹಿಂ: ಮದಾರ್, ಆಕ್
ಮ: ರೂಯೀ
ಗು: ಅಕಾಡೋ
ತೆ: ಜಿಲ್ಲೇಡು
ತ: ಏರ್ಕಂ
ಅರ್ಕ ಅಥವಾ ಎಕ್ಕ ಒಂದು ಔಷಧೀಯ ಸಸ್ಯ.
ಕಾಲೋಟ್ರೋಪಿಸ್ ಜೈಜಾಂಟಿಯ ಎಂಬುದು ಇದರ ಸಸ್ಯ ಶಾಸ್ತ್ರೀಯ ನಾಮ.ಸಂಸ್ಕೃತದಲ್ಲಿ : 'ಅಲರ್ಕ', 'ವಿಕರಣ', 'ಆಸ್ಫೋಟ,';ಇಂಗ್ಲೀಷ್ನಲ್ಲಿ : 'ಸೊಡೊಮ್ ಅಪಲ್';ಹಿಂದಿಯಲ್ಲಿ : 'ಮೊದರ್';ತಮಿಳು ಭಾಷೆಯಲ್ಲಿ : 'ವೆಳೇರುಕ್ಕು'
'ಅರ್ಕ,' ಎಂದರೆ, ಪೂಜನೀಯವೆಂದರ್ಥ. 'ತೈತ್ತರೀಯ ಸಂಹಿತೆ,' ಯಲ್ಲಿ ಅರ್ಕ, ಉಷ್ಣ ಮತ್ತು ತೀಕ್ಶ್ಣ ಗುಣಗಳನ್ನು ಹೊಂದಿದೆಯೆಂದು ಹೇಳಲಾಗಿದೆ. 'ಅಥರ್ವ ಶೌನಕೇಯ ಸಂಹಿತೆ,' ಯಲ್ಲಿ 'ಅರ್ಕಮಣಿ' 'ವಾಜೀಕರಣ,' (ಸಂತಾನ ಸಾಮರ್ಥ್ಯ ಸಂವರ್ಧನೆ) ದಂತೆ ಕಾರ್ಯ ನಿರ್ವಹಿಸುತ್ತದಯೆಂದು ತಿಳಿಸಲಾಗಿದೆ. ಎಕ್ಕ ಬುಡದಲ್ಲಿ ಕವಲೊಡೆದು, ಪೊದೆಯಂತೆ ಬೆಳೆಯುತ್ತದೆ. ಕೆಲವುಬಾರಿ ಇದು ಚಿಕ್ಕ ಮರವಾಗಿ ಬೆಳೆಯಬಹುದು. ಗಿಡದ ಎಲ್ಲಾ ಭಾಗಗಳ ಮೇಲೆ, ಚಿಕ್ಕ ಚಿಕ್ಕ ರೋಮಗಳಿರುತ್ತವೆ. ಕಾಂಡ, ಎಲೆ, ಮತ್ತು ಹೂವಿನ ತೊಟ್ಟಿನೊಳಗೆ, ಬಿಳಿಯ ಸಸ್ಯ ಕ್ಷೀರವಿರುತ್ತದೆ. ಕಾಂಡದ ತುದಿಯಲ್ಲಿ ಮತ್ತು ಎಲೆಯ ಕಂಕುಳಿನಲ್ಲಿ ಬಿಳಿಯ ಹೂಗಳು ಗೊಂಚಲಾಗಿ ಬಿಡುತ್ತವೆ. ಒಂದೇ ಹೂವಿನ ತೊಟ್ಟಿನಮೇಲೆ, ಜೋಡಿಕಾಯಿಗಳಿರುತ್ತವೆ. ಬೀಜದ ತುದಿಯಲ್ಲಿ ರೇಷ್ಮೆಯಂತೆ ನುಣುಪಾದ ರೋಮಗಳಿರುತ್ತವೆ. ಇದರಿಂದ 'ಬೀಜಪ್ರಸಾರ,' ಗಾಳಿಯಸಹಾಯದಿಂದ ಆಗಲು ನೆರವಾಗುತ್ತದೆ.
ಇದರಲ್ಲಿ ಬಿಳಿ ಮತ್ತು ಕೆಂಪು ಬೇದಗಳಿವೆ. ಬಿಳಿಎಕ್ಕ ಮೂಲಿಕಾ ಚಿಕಿತ್ಸೆಯಲ್ಲಿ ಉತ್ತಮವಾದುದು.ಅಗಲವಾದ ಎಲೆಗಳು ಗೊಂಚಲು ಹೂಗಳಿರುವುವು. ಕಾಂಡದ ಮೇಲೆ ಬೂದು ಬಣ್ಣವಿರುವುದು ಹೆಚ್ಚು ಕಂಟಿಗಳಿರುವ ಪೊದೆ. ಬಲಿತಾಗ ಪುಟ್ಟ ಗಿಡವಾಗುವುದು. ಕಾಂಡ ಹಸಿರಾಗಿರುವುದು, ಕಾಯಿ ಬೀಜವಾದಾಗ ಬಿರಿಯುವುದು.ಬೀಜಗಳಿಗೆ ಪುಕ್ಕಗಳಿಂದ ಬೀಜಗಳು ಗಾಳಿಯಲ್ಲಿ ತೇಲಿ ಬೀಜ ಪ್ರಸಾರಣೆ ಮಾಡುವುವು.ಇದರ ಎಲೆ ಅಥವಾ ದಂಟನ್ನು ಮುರಿದಾಗ ಬಿಳಿ ಹಾಲು ಬರುವುದು. ರಥಸಪ್ತಮಿ ದಿವಸ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ.
೧. 'ಬಿಳಿಹೂವು ಬಿಡುವ ಎಕ್ಕ,' ೨. 'ತಿಳಿನೇರಳೆಹೂವು ಬಿಡುವ ಎಕ್ಕ,' ('ಕರಿ ಎಕ್ಕ') ಔಷಧಿಗುಣಗಳು ಈ ಎರಡೂ ಜಾತಿಗಳಲ್ಲಿ ಒಂದೇ ತರಹವಿರುತ್ತದೆ.
ಬೇರು, ಬೇರಿನ ತೊಗಟೆ, ಎಲೆ, ಹಾಲಿನಂತಹ ದ್ರವ ಮತ್ತು ಹೂಗಳು
ಆಲ್ಫಾ ಮತ್ತು ಬೀಟಾ, ಅಮಿರಾನ್, ಪ್ರೊಸೆಸ್ಟರಾಲ್ ಬೀಟಾ ಸಿಟೋಸ್ಪಿರಾಲ್, ಕಾಲಾಕ್ವಿನ್, ಕಾಲೊಟಾಕ್ಸಿನ್, ಕಾಲೊಬ್ರೊಪಿನ್, ಪ್ರೊಸೆರೊಸೈಡ್
ಬಲಿತ ಅರಿಶಿನ ಕೊಂಬು ಮತ್ತು ಬಲಿತ ಎಕ್ಕದ ಬೇರನ್ನು ತಣ್ಣೀರಿನಲ್ಲಿ ತೇದು ತೊನ್ನಿರುವ ಸ್ಥಳದಲ್ಲಿ ಹಚ್ಚುವುದು. ಶರೀರದ ಸ್ವಲ್ಪ ಭಾಗದಲ್ಲಿ ಪ್ರಥಮವಾಗಿ ಲೇಪಿಸುವುದು. ಗುಣಕಂಡ ಮೇಲೆ ಚಿಕಿತ್ಸೆಯನ್ನು ಮುಂದುವರಿಸುವುದು.
ಎಕ್ಕದ ಬೇರಿನತೊಗಟೆ ಮತ್ತುಮೆಣಸಿನ ಕಾಳು ಸಮತೂಕ ನುಣ್ಣಗೆಚೂರ್ಣಮಾಡಿ, ಹಸಿರು ಶುಂಠಿರಸದಲ್ಲಿ ಮರ್ದಿಸಿ ಕಡಲೆಗಾತ್ರ ಗುಳಿಗೆಯನ್ನು ಮಾಡಿ ನೆರಳಲ್ಲಿ ಒಣಗಿಸುವುದು.ಪ್ರತಿಎರಡು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು.
ಹಿಂಗನ್ನು ಎಕ್ಕದ ಹಾಲಿನಲ್ಲಿ ತೇದು ಚೇಳು ಕುಟುಕಿರುವ ಜಾಗದಲ್ಲಿ ಹಚ್ಚುವುದು.
ಇನ್ನೊ ಬಿರಿಯದಿರುವ 20 ಮೊಗ್ಗುಗಳನ್ನು ತಂದು ಶುಂಠಿ ,ಓಮದ ಕಾಳು ಮತ್ತುಕರಿಯ ಲವಣವನ್ನು ಸಮಪ್ರಮಾಣದಲ್ಲಿ ಸೇರಿಸಿ, ಶುದ್ಧ ನೀರಿನಲ್ಲಿಅರೆದುಕಡಲೆಗಾತ್ರ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ದಿವಸಕ್ಕೆ ಎರಡು ಸಾರಿಒಂದೊಂದು ಮಾತ್ರೆಯನ್ನು ಸೇವಿಸಿ ನೀರುಕುಡಿಯುವುದು.
ಎಕ್ಕದಎಲೆಯರಸ 20 ಗ್ರಾಂ, ಬೊಂತೆ ಕಳ್ಳಿ ರಸ 20ಗ್ರಾಂ, ಲಕ್ಕಿ ಎಲೆ ರಸ, 20 ಗ್ರಾಂ, ಉಮ್ಮತ್ತಿ ಎಲೆ ರಸ 20 ಗ್ರಾಂ, ಹಸುವಿನ ಹಾಲು 60ಮಿ, ಲಿ. ಎಳ್ಳಣ್ಣೆ 120 ಗ್ರಾಂ ಸೇರಿಸಿ ಕಾಯಿಸುವಾಗ, ರಾಸ್ಮಿ, ವಿಳಂಗ, ದೇವದಾರು, ಗಜ್ಜುಗದ ತಿರುಳು ಪುಡಿ ಎರಡೆರಡು ಟೀ ಚಮಚ ಹಾಕಿ ಇಳಿಸುವಾಗ 20 ಗ್ರಾಂ ಆರತಿಕರ್ಪೂರ ಹಾಕುವುದು. ತಣ್ಣಗಾದ ಮೇಲೆ ಕೀಲು, ಕಾಲು ನೋವುಗಳಿಗೆ ಹಚ್ಚುವುದು.
Flowers in Hyderabad, India.
Leaves & flowers in Hyderabad, India.
Flowers in Hyderabad, India.
Flowers & fruits in Hyderabad, India.
Flowers and leaves in Kannur India.
Seed pod in Kerala