ಸೀತಾಫಲ (Custard Apple) ಮೂಲತ: ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ. ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಸಲ್ಪಡುತ್ತಿದೆ.
ಇದು ಅನೋನಾಸಿ (Anonaceae)ಕುಟುಂಬಕ್ಕೆ ಸೇರಿದ್ದು, ಅನೋನ ಸ್ಕ್ವಾಮೋಸ (Anona squamosa)ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಅಪಲ್ ಎಂಬ ಬಳಕೆಯ ಹೆಸರೂ ಇದೆ.
ಇದು ಹೆಚ್ಚು ಕಾಂಡಗಳನ್ನು ಹೊಂದಿದ ಸಾಧಾರಣ ಎತ್ತರದ ಗಿಡ.ಹೆಚ್ಚಾಗಿ ಶುಷ್ಕ ಪ್ರದೇಶದಲ್ಲಿ ಕಂಡು ಬರುವುದು.ಹಣ್ಣು ರುಚಿಕರವಾಗಿದೆ.
ಇದರ ಹಣ್ಣು ರುಚಿಕರ ಹಾಗೂ ಪಚನಕಾರಿಯಾಗಿ ಒಳ್ಳೆಯ ಬೇಡಿಕೆ ಹೊಂದಿದೆ.ಇದರ ಬೀಜ ಹಾಗೂ ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿದೆ. ಇದು
ಸೀತಾಫಲದ ಎಲೆಗಳನ್ನು ನುಣ್ಣಗೆ ಅರೆದು ಕುರು, ಗಡ್ಡೆ(ಗ್ರಂಥಿ)ಗಳಿಗೆ ಹಚ್ಚಿದರೆ ಆರಿ ಅಥವಾ ಸಣ್ಣದಾಗಿ ಸೋರಿಹೋಗುತ್ತದೆ. ಇದೇ ಎಲೆಗಳನ್ನು ಅರೆದು ಹಚ್ಚಿದರೆ ಬೆಂಕಿ ಬರುವುದು. ನವೆ(ದಡಿಕೆ) ಗುಣವಾಗುತ್ತದೆ. ೩ ರಿಂದ ೬ ದಿವಸ.
ಜ್ವರ, ಕೆಮ್ಮುದಮ್ಮಿಗೆ: ಸೀತಾಫಲದ ಗಿಡದ ತೊಗಟೆ ೧ ತೊಲೆ ಜಜ್ಜಿ ೪ ಕುಡ್ತೆ ನೀರು ಬತ್ತಿಸಿ ೧ ಕುಡ್ತೆ ಮಾಡಿ ಆರಿಸಿ ಇಟ್ಟುಕೊಂಡು ದಿನಕ್ಕೆ ೩-೪ ಸಲ ಜೇನು ಕುಡಿದರೆ ಜ್ವರ, ಕೆಮ್ಮ, ಗೂರಲು(ಉಬ್ಬಸ) ಗುಣವಾಗಿ ನಿತ್ರಾಣ ಕಮ್ಮಿಯಾಗುತ್ತದೆ. ರೋಗಕ್ಕನುಸರಿಸಿ ಕೆಲವು ದಿವಸಗಳ ವರೆಗೆ ಸೇವಿಸುತ್ತಾ ಬರುವುದು.
ಹುಣ್ಣು, ಗಾಯಗಳಿಗೆ: ಸೀತಾಫಲದ ಎಲೆ ತಂದು ಒಣಗಿಸಿ ಬಾಣಲೆಯಲ್ಲಿ ಹಾಕಿ ಕರಕಾಗುವಂತೆ ಹುರಿದು ಹುಡಿಮಾಡಿಟ್ಟುಕೊಡು ಗಾಯಕ್ಕೆ ಹಾಕಿದರೆ, ಗುಣವಾಗುತ್ತದೆ. ಹುಡಿಯನ್ನು ವ್ಯಾಸಲೀನ್ ಹಾಕಿ ಮುಲಾಮಿನಂತೆ ಮಾಡಿಟ್ಟು ಹುಣ್ಣುಗಳಿಗೆ ಹಚ್ಚುತ್ತ ಬಂದರೆ ಹುಣ್ಣುಗಳು ಮಾಯುತ್ತವೆ.
ಸೀತಾಫಲದ ಎಲೆಗಳನ್ನು ತಂದು ಒಣಗಿಸಿ ಸಮಭಾಗ ಹೊಗೆ ಸಪ್ಪು ಸೇರಿಸಿ ಬಾಣಲೆಯಲ್ಲಿ ಹಾಕಿ ಬೂದಿ ಆಗುವ ವರೆಗೆ ಹುರಿದು ೧/೩ ಭಾಗದಷ್ಟು ಸುಣ್ಣದ ಹುಡಿ
ಸೀತಾಫಲ (Custard Apple) ಮೂಲತ: ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ. ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಸಲ್ಪಡುತ್ತಿದೆ.