dcsimg

ಉತ್ತರಾಣಿ ( Kannada )

provided by wikipedia emerging languages
 src=
' 'ಉತ್ತರಾಣಿ ಗಿಡ'

ಅಪಮಾರ್ಗ ಒಂದು ಔಷಧೀ ಸಸ್ಯ. ಇದನ್ನು ಉತ್ತರಾಣಿಗಿಡ ಎಂದು ಕೂಡಾ ಕರೆಯಲಾಗುತ್ತದೆ. ಅಪಮಾರ್ಗ ಅಮರಾಂತಸಿಯ ಎಂದ ಸಸ್ಯ ಕುಟುಂಬಕ್ಕೆ ಸೇರಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ’ಅಪಮಾರ್ಗ’ವೆನ್ನುತ್ತಾರೆ. ಹಾಗೂ ಚಾಫ್-ಹೂವು , ಮುಳ್ಳುಗಟ್ಟಿಹೂ ಎಂದು ಕೂಡಾ ಕರೆಯಲಾಗುತ್ತದೆ.ಇದರ ಸಸ್ಯಶಾಸ್ತ್ರೀಯ ಹೆಸರು, 'Achyranthes aspera' ಯೆಂದು. ಹಾಗೆಯೇ, ತಮಿಳಿನಲ್ಲಿ, ನಾಯುವ್ರಿ, ಮಲಯಾಳಂನಲ್ಲಿ ಸಿರುಕಡಲಡಿ, ತೆಲುಗಿನಲ್ಲಿ, ಕಡಲರಿ ಕಾಟಲೇಟಿ, ಹಿಂದಿಯಲ್ಲಿ, ಅಂತಿಶ, ಚಿರ್ಚಿತಾ, ಅಪಂಗ, ಹೀಗೆ ಹಲವಾರು ಭಾಷೆಗಳಲ್ಲಿ ಬೇರೆ-ಬೇರೆ ಹೆಸರುಗಳಿಂದ ಜನಪ್ರಿಯವಾಗಿದೆ. ಹೆಚ್ಚುಕಡಿಮೆ ಎಲ್ಲಾ ಪ್ರದೇಶಗಳಲ್ಲೂ, ಬಯಲಿನಲ್ಲಿ ಹುಲುಸಾಗಿ ಬೆಳೆಯುತ್ತದೆ.

ಉತ್ತರಾಣಿ ಗಿಡದ ಆಕಾರ

ಉತ್ತರಾಣಿ, ಗಿಡ, ಸುಮಾರು 30೦ ಸೆಂ. ಮೀ ನಿಂದ 9೦ ಸೆಂ.ಮೀಟರ್ ಎತ್ತರ ಬೆಳೆಯುವ ಗಿಡ. ಗುಲಾಬಿ ಬಣ್ಣದ ಹೂವೂಗಳು ಬಿಡುತ್ತವೆ.ಇದರ ಬೀಜ, ಬೇರು, ಕಾಂಡ,ಎಲೆ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ.

ಉತ್ತರಾಣಿಗಿಡ ಬೆಳೆಯುವ ಪ್ರದೇಶಗಳು

ಸಮಶೀತೋಷ್ಣ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ರಸ್ತೆಯಂಚಿನಲ್ಲಿ ಖಾಲಿ ನಿವೇಶನಗಳ ಅಂಚಿನಲ್ಲಿ ಹೊಲಗದ್ದೆಗಳ ಬದುವಿನಲ್ಲಿ ಎತ್ತರಕ್ಕೆ ಇವು ಬೆಳೆಯುತ್ತವೆ. ಹೆಚ್ಚುಕಡಿಮೆ ಎಲ್ಲಾ ಪ್ರದೇಶಗಳಲ್ಲೂ, ಬಯಲಿನಲ್ಲಿ ಹುಲುಸಾಗಿ ಬೆಳೆಯುತ್ತದೆ.

ಉಪಯೋಗಗಳು

  • ಉತ್ತರಾಣಿ ಎಲೆಯ ಕಷಾಯ, ಇಲ್ಲವೇ ರಸಸೇವನೆಯಿಂದ ಮೂತ್ರವಿಸರ್ಜನೆಯ ಕ್ಲೇಶವಿರುವುದಿಲ್ಲ. ಭೇದಿಯಾಗುವ ಸಂದರ್ಭದಲ್ಲಿ ಈ ಎಲೆಯ ರಸವನ್ನು ಮೊಸರಿಗೆ ಬೆರೆಸಿಕೊಂಡು ಸೇವಿಸಿದರೆ,ತಕ್ಷಣ ಭೇದಿ ನಿಲ್ಲುತ್ತದೆ.
  • ಉತ್ತರಾಣಿ ರಸ, ಮೂಲವ್ಯಾಧಿ, ಹೊಟ್ಟೆ ನೋವು, ಸುಟ್ಟ ಗಾಯಗಳಿಗೆ ಹಾಗೂ ಚರ್ಮವ್ಯಾಧಿಗಳಿಗೆ ದಿವ್ಯೌಷಧ.
  • ಉತ್ತರಾಣಿ ಬೇರನ್ನು ಕುಟ್ಟಿ ರಸತೆಗೆದು, ನೀರಿನಲ್ಲಿ ಕುದಿಸಿ ಕುಡಿದರೆ, ನಿದ್ರಾಹೀನತೆ ದೂರವಾಗುತ್ತದೆ.
  • ಒಣಗಿದ ಉತ್ತರಾಣಿ ಕಡ್ಡಿಯ ಕಾಂಡವನ್ನು ಸುಟ್ಟು ಭಸ್ಮಮಾಡಿ, ಅದಕ್ಕೆ ಕಾಳುಮೆಣಸಿನ ಪುಡಿ, ಜೇನುತುಪ್ಪಕ್ಕೆ ೩-೪ ಚಿಟಿಕೆಹಾಕಿಕೊಂಡು ಸೇವಿಸಿದರೆ,ನೆಗಡಿ ಕೆಮ್ಮು,ರಕ್ತಹೀನತೆ, ಅಸ್ತಮಾ, ಹೃದಯ ಸಂಬಂಧೀ ಕಾಯಿಲೆಗಳಿಗೆ ಉಪಯೋಗಕಾರಿಯಾಗುತ್ತದೆ.
  • ಚೇಳು, ಜೇನುಹುಳ,ಮತ್ತಿತರ ಕೀಟಗಳುಕಡಿದಾಗ ಉತ್ತರಾಣಿ ಎಲೆಯನ್ನು ಚೆನ್ನಾಗಿ ಅರೆದು ಲೇಪವನ್ನು ಗಾಯದಮೆಲೆ ಹಚ್ಚಿದರೆ ಉಪಶಮನವಾಗುತ್ತದೆ.
  • ಬೆಲ್ಲಕ್ಕೆ ಒಂದು ಚಮಚೆ ಉತ್ತರಾಣಿ ರಸವನ್ನು ಸೇರಿಸಿ ಬೆಳಿಗ್ಯೆ ಎದ್ದಕೂಡಲೇ ಖಾಲಿಹೊಟ್ಟೆಗೆ ಸೇವಿಸುವುದರಿಂದ ರಕ್ತಹೀನತೆಗೆ ಒಳ್ಳೆಯ ಉಪಕಾರಿಯಾಗುತ್ತದೆ.
  • ಉತ್ತರಾಣಿಯ ಭಸ್ಮ, ಕ್ಷಾರದ ಗುಣವನ್ನು ಹೊಂದಿರುವುದರಿಂದ ಬಟ್ಟೆ ತೊಳೆಯಲು ಮಾರ್ಜಕವಾಗಿಯೂ ಬಳಸಬಹುದಾಗಿದೆ.
  • ಉತ್ತರಾಣಿಯ ಭಸ್ಮ, ಉಪ್ಪು ಹಾಗೂ ಸಾಸಿವೆ ಎಣ್ಣೆಯ ಲೇಹ್ಯದಿಂದ ಹಲ್ಲುಜ್ಜಿದರೆ, ಹಲ್ಲುನೋವು ನಿವಾರಣೆಯಾಗುತ್ತದೆ. ಕೆಲವರು ಉತ್ತರಾಣಿಯ ಒಣಗಿದ ಕಡ್ಡಿಯಿಂದ ಹಲ್ಲುಜ್ಜುತ್ತಾರೆ.
  • ಉತ್ತರ ಕರ್ನಾಟಕದಲ್ಲಿ, ದೀಪಾವಳಿ ಹಬ್ಬದ ಸಮಯದಲ್ಲಿ ಸಗಣಿ-ಸುಣ್ಣ-ಕೆಮ್ಮಣ್ಣಿನಲ್ಲಿ ಪಾಂಡವ-ಕೌರವರನ್ನು ಮಾಡಿ, ಅದಕ್ಕೆ ಉತ್ತರಾಣಿ ಕಡ್ಡಿಗಳನ್ನು ಸಿಕ್ಕಿಸಿ ಮನೆಯ ಮುಂಬಾಗಿಲಿನಲ್ಲಿ ಇಡಲಾಗುತ್ತದೆ.

ಗರ್ಭಿಣಿ ಹೆಂಗಸರಿಗೆ ಉತ್ತರಾಯಣಿ ಸೂಕ್ತವಲ್ಲ

ಗರ್ಭಿಣಿ ಹೆಂಗಸರು ಇದರಿಂದ ದೂರವಿರುವುದು ಒಳ್ಳೆಯದು ಉತ್ತರಾಣಿಯ ಅಧಿಕ ಸೇವನೆಯಿಂದ ಗರ್ಭಪಾತವಾಗುವ ಸನ್ನಿವೇಶಗಳು ಹೆಚ್ಚು.

ಹೆಚ್ಚು ವಿವರಗಳನ್ನು ಸಂಗ್ರಹಿಸಲು ಸಂಪರ್ಕಿಸಿ

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಉತ್ತರಾಣಿ: Brief Summary ( Kannada )

provided by wikipedia emerging languages
 src= ' 'ಉತ್ತರಾಣಿ ಗಿಡ'

ಅಪಮಾರ್ಗ ಒಂದು ಔಷಧೀ ಸಸ್ಯ. ಇದನ್ನು ಉತ್ತರಾಣಿಗಿಡ ಎಂದು ಕೂಡಾ ಕರೆಯಲಾಗುತ್ತದೆ. ಅಪಮಾರ್ಗ ಅಮರಾಂತಸಿಯ ಎಂದ ಸಸ್ಯ ಕುಟುಂಬಕ್ಕೆ ಸೇರಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ’ಅಪಮಾರ್ಗ’ವೆನ್ನುತ್ತಾರೆ. ಹಾಗೂ ಚಾಫ್-ಹೂವು , ಮುಳ್ಳುಗಟ್ಟಿಹೂ ಎಂದು ಕೂಡಾ ಕರೆಯಲಾಗುತ್ತದೆ.ಇದರ ಸಸ್ಯಶಾಸ್ತ್ರೀಯ ಹೆಸರು, 'Achyranthes aspera' ಯೆಂದು. ಹಾಗೆಯೇ, ತಮಿಳಿನಲ್ಲಿ, ನಾಯುವ್ರಿ, ಮಲಯಾಳಂನಲ್ಲಿ ಸಿರುಕಡಲಡಿ, ತೆಲುಗಿನಲ್ಲಿ, ಕಡಲರಿ ಕಾಟಲೇಟಿ, ಹಿಂದಿಯಲ್ಲಿ, ಅಂತಿಶ, ಚಿರ್ಚಿತಾ, ಅಪಂಗ, ಹೀಗೆ ಹಲವಾರು ಭಾಷೆಗಳಲ್ಲಿ ಬೇರೆ-ಬೇರೆ ಹೆಸರುಗಳಿಂದ ಜನಪ್ರಿಯವಾಗಿದೆ. ಹೆಚ್ಚುಕಡಿಮೆ ಎಲ್ಲಾ ಪ್ರದೇಶಗಳಲ್ಲೂ, ಬಯಲಿನಲ್ಲಿ ಹುಲುಸಾಗಿ ಬೆಳೆಯುತ್ತದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು